ಟ್ರಾಫಿಕ್​ ಪೊಲೀಸರ ಸಮಯ ಪ್ರಜ್ಞೆಯಿಂದ ಮಹಿಳಾ ಹೋಟೆಲ್ ಉದ್ಯಮಿ ಬಚಾವ್


ಟ್ರಾಫಿಕ್​ ಪೊಲೀಸರ ಸಮಯ ಪ್ರಜ್ಞೆಯಿಂದ ಮಹಿಳಾ ಹೋಟೆಲ್ ಉದ್ಯಮಿ ಬಚಾವ್

ಮಹಿಳಾ ಉದ್ಯಮಿಯ ಅಪಹರಣ 


ಬೆಂಗಳೂರು ಅ.02: ಜಾಲಹಳ್ಳಿ ಸಂಚಾರಿ ಪೊಲೀಸರ ಸಮಯ ಸಮಯ ಪ್ರಜ್ಞೆಯಿಂದ ಕಿಡ್ನಾಪ್ ಆಗಿದ್ದ ಮಹಿಳಾ ಹೋಟೆಲ್ ಉದ್ಯಮಿ  ಬಚಾವ್​ ಆಗಿದ್ದಾರೆ. ನಿವೃತ್ತ ಸೇನಾಧಿಕಾರಿ ವಿಜಯ್ ಪತ್ನಿ, ಮಹಿಳಾ ಹೋಟೆಲ್ ಉದ್ಯಮಿ ಪಂಕಜಾ ಅಪಹರಣವಾಗಿದ್ದ ಮಹಿಳೆ. ನಗರದ ಎಂಇಎಸ್ ರಿಂಗ್ ರಸ್ತೆಯಲ್ಲಿ ಪಂಕಜಾ ಕಳೆದ ನಾಲ್ಕು ವರ್ಷಗಳಿಂದ ಡಿಎಂ ರೆಸಿಡೆನ್ಸಿ ಹೋಟೆಲ್  ನಡೆಸುತ್ತಿದ್ದಾರೆ. ಭಾನುವಾರ  ಮಧ್ಯಾಹ್ನ 12 ಗಂಟೆ ಸುಮಾರಿಗೆ ರೂಂ ಬುಕ್​​ ಮಾಡಲು ಬುರ್ಖಾ ಧರಿಸಿಕೊಂಡು ನಾಲ್ವರು ಮಹಿಳೆಯರು ಬಂದಿದ್ದಾರೆ.


ಆದರೆ ಪಂಕಜಾ ಅವರು ಸ್ಥಳೀಯರಿಗೆ ರೂಂ ಕೊಡಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಐವರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪಂಕಜಾ ಅವರ ಮೇಲೆ ಬುರ್ಖಾಧಾರಿ ಮಹಿಳೆಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಂತರ ಈ ನಾಲ್ವರು ಮಹಿಳೆಯರು ಪಂಕಜಾ ಅವರನ್ನು ಸುತ್ತುವರೆದು ಕಿಡ್ನಾಪ್​ ಮಾಡಿಕೊಂಡು ಆಟೋದಲ್ಲಿ ಕರೆದೊಯ್ಯುತ್ತಿದ್ದರು.


ಈ ವಿಚಾರ ಜಾಲಹಳ್ಳಿ ಸಂಚಾರಿ ಪೊಲೀಸರಿಗೆ ತಿಳಿದಿದೆ. ಆರೋಪಿಗಳು ಹೋಟೆಲ್​ನಿಂದ ಕೊಂಚ ದೂರ ಹೊಗುತಿದ್ದಂತೆ ಜಾಲಹಳ್ಳಿ ಸಂಚಾರಿ ಪೊಲೀಸರು ಆಟೋ ತಡೆದು, ಪಂಕಜಾ ಅವರನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪಂಕಜಾ ಅವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No comments

Powered by Blogger.