ಅಮೂಲ್ಯ ದ 25 ನೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ ದ ಪೂರ್ವಭಾವಿ ಸಭೆ.
ಯುವ ಸಮುದಾಯ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಲು ಸಂಭ್ರಮಾಚರಣೆ : ರಘು ಎ ಮೂಲ್ಯ ಪಾದೆ ಬೆಟ್ಟು
---------------
ಮುಂಬಯಿ ಅ 15. ಕುಲಾಲ್ ಸಂಘ ಮುಂಬೈ ಮುಖವಾಣಿ *ಅಮೂಲ್ಯ* ದ 25ನೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆಯು ನವಂಬರ್ 5. ಬೆಳಿಗ್ಗೆ ಗಂಟೆ 9, ರಿಂದ ಸಂಜೆ 5.00ರ ವರೆಗೆ ನಂದ ದೀಪ ಹೈಸ್ಕೂಲ್ ಸಭಾಗೃಹ, ಜಯಪ್ರಕಾಶ್ ನಗರ, ಗೊರೆಗಾಂವ್ (ಪೂ), ಮುಂಬಯಿ ಇಲ್ಲಿ ನಡೆಯಲಿದೆ . ಈ ಸಾಹಿತ್ಯ ಸಾಂಸ್ಕೃತಿಕ ,ಸನ್ಮಾನ ವಿಭಿನ್ನ ವೈಭವ ದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮುಂಬೈ ಕುಲಾಲ ಸಂಘದ ಕೇಂದ್ರ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ರಘು ಎ ಮೂಲ್ಯ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಕುಲಾಲ್ ಸಂಘ ದ ಅಧ್ಯಕ್ಷರಾದ ರಘು ಎ ಮೂಲ್ಯ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ವಿಶೇಷ ಕೊಡುಗೆಯನ್ನು ನೀಡಿದೆ ಅಪಾರ ಸಂಖ್ಯೆಯ ಬರಹಗಾರರಿಗೆ ವೇದಿಕೆಯಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಪತ್ರಿಕೆ ಗುರುತಿಸಿದೆ. 25 ನೆಯ ವರ್ಷದ ಬೆಳ್ಳಿ ಹಬ್ಬ ಅರ್ಥಪೂರ್ಣವಾಗಿ ಆಚರಿಸಲು ಸಂಘದ ಸಮಾಜದ ಬಂಧುಗಳು ಸಹಕಾರ ನೀಡಬೇಕು . ಯುವ ಸಮುದಾಯ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಬೇಕೆ ಎನ್ನುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯಲ್ಲಿ 25ನೇ ವರ್ಷದ ಸಂಭ್ರಮವನ್ನು ಆಚರಿಸಲು ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದೇವೆ.ಪತ್ರಿಕೆಗೆ ಬೆಂಬಲ ನೀಡಿದ ಮತ್ತು ವಿವಿಧ ಸಮಾಜದ ಮುಖವಾಣಿಯ ಸಂಪಾದಕರನ್ನು . ಸಾಹಿತಿಗಳನ್ನು ಈ ಕಾರ್ಯಕ್ರಮದ ಮೂಲಕ ಗುರುತಿಸುವ ಕಾರ್ಯ ನಡೆಯಲಿದೆ ಎಂದು ನುಡಿದರು
ಅಮೂಲ್ಯದ ಸಂಪಾದಕ ಶಂಕರ್ ವೈ ಮೂಲ್ಯ ಮಾತನಾಡಿ ದಿನಪೂರ್ತಿ ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಮಹಾರಾಷ್ಟ್ರದ ವಿವಿಧ ಉಪನಗರ್ ಗಳಿಂದ ಹಿರಿಯ ಸಾಹಿತಿಗಳು. ಲೇಖಕರು ಪತ್ರಕರ್ತರು ಮತ್ತು ಸಂಘಟಕರು ಸೇರಿಕೊಳ್ಳುತ್ತಾರೆ ಹಾಗೂ ಕುಲಾಲ ಸಮಾಜದ ಹಿರಿಯ ಮುಖಂಡರು. ಕಿರಿಯರು. ಪಾಲ್ಗೊಳ್ಳಲಿದ್ದಾರೆ ವಿಭಿನ್ನ ಶೈಲಿಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸಾಹಿತ್ಯ ಆಸಕ್ತರನ್ನು ಖುಷಿ ನೀಡಲಿದೆ. ಕುಲಾಲ ಸಂಘದಲ್ಲಿ ಇದೊಂದು ಹೊಸ ರೀತಿಯ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು
ಸಂಘದ. ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್ ಮಾತನಾಡುತ್ತಾ ಸಮಾಜದ ಮತ್ತು ಸಂಘದ ಸಮಗ್ರ ಸುದ್ದಿಯನ್ನು ಅಮೂಲ್ಯ ಪ್ರತಿ ಮೂರು ತಿಂಗಳಿಗೊಮ್ಮೆ ಸಮಾಜ ಬಾಂಧವರಿಗೆ ತಲುಪಿದೆ. ಪ್ರಾರಂಭ ದಿನಗಳಿಂದ ಇಂದಿನವರೆಗೆ ಪತ್ರಿಕೆ ಸಮಾಜವನ್ನು ಜಾಗೃತಿಗೊಳಿಸಿದೆ. ಪತ್ರಿಕೆಯ ಬೆಳ್ಳಿ ಹಬ್ಬ ಸಂಭ್ರಮ ಆಚರಣೆಯು ಮುಂಬೈ ಕುಲಾಲ ಸಂಘದ ಸೇವಾ ಕಾರ್ಯಗಳನ್ನು ಮತ್ತೆ ನೆನಪಿಸುವಂಥಾಗಲಿಎಂದು ನುಡಿದರು
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯನ್ ಸ್ವಾಗತಿಸಿದರು. ಗೌರವ ಕೋಶಧಿಕಾರಿ ಜಯ ಅಂಚನ್ ಧನ್ಯವಾದ ನೀಡಿದರು.
ಸಂಘದ ಉಪಾಧ್ಯಕ್ಷ ಡಿಐ ಮೂಲ್ಯ .ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತ ಬಂಜನ್. ಜೊತೆ ಕಾರ್ಯದರ್ಶಿ ರೇಣುಕ ಸಾಲಿಯಾನ್ . ಜ್ಯೋತಿ ಆಪರೇಟಿವ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಸಾಲಿಯಾನ್ . ಕಾರ್ಯದರ್ಶಿ ಪಿ ಶೇಖರ್ ಮೂಲ್ಯ. ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯ ಧ್ಯಕ್ಷ ಸುನಿಲ್ ಸಾಲಿಯಾನ್ . ಕೆ ಗೋಪಾಲ್ ಬಂಗೇರ. ಮತ್ತು ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು
Post a Comment