ಪಿತೃಪಕ್ಷದಲ್ಲಿ ಅಗಲಿದ ಆತ್ಮಗಳಿಗೆ ಶ್ರಾದ್ಧ ಮಾಡುವುದು .
ಪಿತೃಪಕ್ಷದಲ್ಲಿ ಅಗಲಿದ ಆತ್ಮಗಳಿಗೆ ಶ್ರಾದ್ಧ ಮಾಡುವುದು .
- ಜಯ ಸಿ ಪೂಜಾರಿ
ಮಹಾಲಯ ಅಮಾವಾಸ್ಯೆ ( ಮಾಲಯ ಅಮಾವಾಸ್ಯೆ) ಹತ್ತಿರ ಬರುತ್ತಾ ಉಂಟು . ಇದೇ ಹದಿನಾಲ್ಕನೇ ತಾರೀಕು ಶನಿವಾರದಂದು ಮಾಲಯ ಅಮಾವಾಸ್ಯೆ ಪ್ರತಿ ಮನೆಯಲ್ಲೂ ಹಿರಿಯರೆಲ್ಲರು ಅಗಲಿರುತ್ತಾರೆ . ಅವರಿಗೆ ಈಗ ಮನೆಯಲ್ಲಿ ಜಿವಂತಾ ಇರುವ ಸಂಬಂದಿಕರು ಶ್ರಾದ್ಧ ಮಾಡುವುದು ಅವರವರ ಕರ್ತವ್ಯ ಕೂಡ ಆಗಿರುತ್ತದೆ . ಯಾಕಂದರೆ ಅಮಾವಾಸ್ಯೆ ಎಂಬುದಕ್ಕೆ ವಿಶೇಷ ಅರ್ಥವಿದೆ . ಮನುಷ್ಯರು ಹುಟ್ಟಿದವರು ಒಂದಲ್ಲ ಒಂದು ದಿನ ದೇವರ ಪಾದ ಸೇರಲೇ ಬೇಕು .
ಜೀವವನ್ನು ಬಿಟ್ಟಾಗ ಮನೆಯವರು ಸಂಬಂದಿಕರು ಸ್ವಲ್ಪ ದಿನ ಕಣ್ಣೀರುಡುವುದು ಸಹಜ . ಸ್ವಲ್ಪ ದಿನದ ನಂತರ ಎಲ್ಲವೂ ಮರೆತು ಹೋಗುತ್ತದೆ .ದಿನ ಉರುಳಿದಂತೆ ಅವರ ಪ್ರೀತಿ ವಾತ್ಸಲ್ಯ ಎಲ್ಲಾ ಹೋಗುತ್ತದೆ . ಅಲ್ಲಲ್ಲಿ ರಕ್ತ ಸಂಬಂದಿ ಮನೆಗಳಲ್ಲಿ ನೆಮ್ಮದಿ ಇರುವುದಿಲ್ಲ . ಇದಕ್ಕೆ ಕಾರಣ ಸತ್ತವರ ಪಿತೃಗಳೇ ಕಾರಣ. ಕೆಲವೊಂದು ರಕ್ತ ಸಂಬಂಧಿಗಳಿಗೆ ಆತ್ಮಗಳು ಪೀಡೆ ಕೊಡುವುದು ಇನ್ನಿತರ ಪೀಡೆಗಳು ಕಾಣ ಸಿಗುವುದು . ಕೆಲವರು ಅದಕ್ಕೆಲ್ಲ ಮಂತ್ರವಾದಿಗಳ ಹತ್ತಿರ ಹೋಗಿ ತಡೆಗಟ್ಟುವುದು ಏನೇನೋ ಮಾಡುತ್ತಾರೆ . ಇದು ಊರುಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಅಧಿಕ ಪ್ರಕರಣಗಳು ನಡೆಯುತ್ತವೆ . ಪಿತೃ ಪಕ್ಷ ಬರುವ ಸಮಯಗಳಲ್ಲಿ ಹಿರಿಯರು ಅವರ ಆತ್ಮಗಳೆಲ್ಲ ದೈವ ದೇವರುಗಳ ಹಿಡಿತದಿಂದ ಹೊರ ಬಂದು ಮನೆ ಮಂದಿಗಳನ್ನು ನೋಡಲು ಮನೆ ಬಾಗಿಲಿನ ದ್ವಾರದಲ್ಲಿಯೇ ಬಂದು ಆಸೀನರಾಗುತ್ತಾರೆ . ಎಂಬುದು ಬಲ್ಲವರು ಹೇಳುತ್ತಾರೆ .
ಮನೆಯಲ್ಲಿ ಹಿರಿಯ ಕಿರಿಯ ಪಿತೃಗಳು ಅಗಲಿದವರೆಲ್ಲ ಮನೆಯವರು ಬಡಿಸಿದ ಭೋಜನವನ್ನು ಸವಿದು ಅಂದು ಮನೆಯವರಿಗೆಲ್ಲ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಇರಲಿ ಎಂದು ಆಶೀರ್ವದಿಸಿ ಕಾಗೆಗಳಿಗೆ ಅನ್ನ ನೀಡಿದನ್ನು ಕಂಡು ಹೊರಟು ಹೋಗುತ್ತಾರೆ ಎಂದು ನಂಬಿಕೆ ಯೊಂದಿಗೆ ಶ್ರಾದ್ಧ ಮಾಡುವ ಅಗತ್ಯವಿರುತ್ತದೆ . ಈ ಶ್ರಾದ್ಧವನ್ನು ಈಗ ಮನೆಯ ಹಿರಿಯರೆಲ್ಲ ಮಾಡುತ್ತಾ ಇದ್ದರೆ ಈಗಿನ ಯುವ ಜನಾಂಗ ಅದನ್ನು ಹಿಂಬಾಲಿಸಿಕೊಂಡು ಬರಬಹುದು . ಆದರೂ ಈಗಿನ ಯುವ ಜನಾಂಗಕ್ಕೆ ಇದೆಲ್ಲ ಅರ್ಥ ಆಗುವುದೂ ಇಲ್ಲ ಮತ್ತು ಅವರು ನಂಬುವುದು ಇಲ್ಲ .
ಕಾಂತಾರ ಸಿನಿಮಾ ಬಂದ ಮೇಲೆ ಯುವ ಜನಾಂಗ ದೈವಗಳನ್ನು ನಂಬಲು ಪ್ರಯತ್ನಿಸಿದರು. ಇನ್ನು ಪಿತೃ ಪಕ್ಷ ಶ್ರಾದ್ಧ ಬಗ್ಗೆ ಯಾರಾದರೂ ಸಿನಿಮಾ ಮಾಡಿದರೇನೇ ಈಗಿನ ವಿದ್ಯಾವಂತ ಮಕ್ಕಳು ನಂಬಿಕೆ ಇಡಬಹುದು .
ಏನೇ ಆಗಲಿ ನಂಬಿಕೆನೇ ಎಲ್ಲಾ ಸರ್ವಸ್ತ ಅಂದು ಕೊಂಡರೆ ಎಲ್ಲವೂ ಇದೆ . ಬಗ್ಗಿದವನಿಗೆ ಒಂದು ಏಟು ಜಾಸ್ತಿ ನಂಬದವನಿಗೆ ಯಾವ ಪಿತೃಗಳೇ ಎದುರಿಲ್ಲ .
- ಜಯ ಸಿ ಪೂಜಾರಿ
Post a Comment