ಅ 22. ಬಂಟರ ಸಂಘ ಮುಂಬೈ, ವಸಯಿ ದಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ಉತ್ಸವ, ಹರಿಕಥೆ, ಭಜನೆ ಸಂಕೀರ್ತನೆ.



    ವಸಯಿ ಅ 19.  ಬಂಟರ ಸಂಘ ಮುಂಬಯಿ ವಸಯಿ ದಾಹಣು  ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು  ಅ 22 ರಂದು ರವಿವಾರ ಮಧ್ಯಾಹ್ನ 2:30 ರಿಂದ  ನಾಲಾಸೋಪಾರ ಪೂರ್ವದ  ರಿಜೆನ್ಸಿ ಬ್ಯಾಂಕ್ವೆಟ್ ಹಾಲ್ ಇಲ್ಲಿ  ನವರಾತ್ರಿ ಉತ್ಸವದ ಪ್ರಯುಕ್ತ ಭಜನೆ, ಸನ್ಮಾನ, ಹರಿಕಥೆ, ದೇವಿ ಪೂಜೆ ನಡೆಯಲಿದೆ. ಪ್ರಾದೇಶಿಕ ಸಮಿತಿಯು ಸಕ್ರಿಯವಾಗಿ ಕಾರ್ಯಕ್ರಮ ಗಳನ್ನು ನಿಯಮಿತವಾಗಿ ನಡೆಸಿ ಕೊಂಡು ಬರುತಿದ್ದು. ನ್ಯಾಯಕತ್ವದ ಗುಣ ಹೊಂದಿರುವ ಬಂಟ ಸಮುದಾಯ ಕ್ಕೆ ಸಮಾಜವನ್ನು ಮುನ್ನಡೆಸುವ ಬೆಳೆಸುವ ವಿಶೇಷ ಶಕ್ತಿಯನ್ನು ಪ್ರಾದೇಶಿಕ ಸಮಿತಿಗೆ ಬಂಟರ ಸಂಘ ಮುಂಬಯಿ  ನೀಡುತ್ತಿರುವುದು ವಿಷೇಶತೆವಾಗಿದ್ದು,
ಅಂದಿನ ಕಾರ್ಯಕ್ರಮ ದಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಚಂದ್ರ ಹಾಸ್ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಬಂಟರ ಸಂಘ ಮುಂಬೈ ಇದರ ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಲಯ  ಸಮನ್ವಯಕರು ಶಶಿಧರ  ಕೆ ಶೆಟ್ಟಿ ಇನ್ನಂಜೆ ಇವರ ಉಪಸ್ಥಿತಿಯಲ್ಲಿ , ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಪಾಂಡು ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಸೆ ಉಷಾ ಶ್ರೀಧರ್ ಶೆಟ್ಟಿ ಕರ್ನಿರೆ ಅವರ ನೇತೃತ್ವದಲ್ಲಿ   ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯ ಧ್ಯಕ್ಸೆ  ಉಮಾ ಕೃಷ್ಣ ಶೆಟ್ಟಿ ಉಪಸ್ಥಿತಿಯಲ್ಲಿ  ನಡೆಯಲಿದೆ.

ಮಧ್ಯಾಹ್ನ 2:30 ಕ್ಕೆ ವಿದ್ವಾನ್   ಕೈರ ಬೆಟ್ಟು ವಿಶ್ವನಾಥ್ ಭಟ್ ಅವರಿಂದ "ಸತಿ ಸಾವಿತ್ರಿ" ಹರಿಕಥೆ,  ಮಹಿಳಾ ವಿಭಾಗದ ಸದಸ್ಯರಿಂದ ಭಜನೆ. ಅನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಸಯಿ ದಾಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಕ್ರಿಯ ಕಾರ್ಯಕರ್ತೆಯರಾದ ವೀಣಾ ಸದಾಶಿವ ಶೆಟ್ಟಿ, ಶಕುಂತಲಾ ಶೆಟ್ಟಿ, ಲೀಲಾವತಿ ಆಳ್ವ ಇವರುಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು. 

ಈ ಕಾರ್ಯಕ್ರಮ ದಲ್ಲಿಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಗೌ. ಕೋಶಾಧಿಕಾರಿ ಸಿ ಎ ಹರೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ  ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ ಶೆಟ್ಟಿ,  ಪ್ರಾದೇಶಿಕ ಸಮಿತಿಯ ಸಲಹೆಗಾರ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಸಂಚಾಲಕರು ಜಯಂತ್ ಪಕ್ಕಳ, ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಉಪಕಾರ್ಯಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿ ಜಗನಾಥ್. ಡಿ. ಶೆಟ್ಟಿ ಪಳ್ಳಿ, ಕೋಶಾಧಿಕಾರಿ ವಿಜಯ್. ಎಮ್. ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಧ್ಯಕ್ಷ ಸುಪ್ರೀತ್ ಶೆಟ್ಟಿ ನೀರೆ ಹಾಗೂ ಉಪ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತಲಿರುವರು .

ಈ ಕಾರ್ಯಕ್ರಮದಲ್ಲಿ ವಸಯಿ ನಾಲಾಸೋಪಾರ.  ವಿರಾರ್ ಪರಿಸರದ ಹೆಚ್ಚಿನ ಮಹಿಳೆಯರು ಪಾಲ್ಗೊಳ್ಳಬೇಕಾಗಿ   ಮಹಿಳಾ ವಿಭಾಗದ ಸಲಹೆಗಾರ ಸಮಿತಿಯ ಕಾರ್ಯಧ್ಯಕ್ಷೆ  ಶಶಿಕಲಾ ಶಶಿಧರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ಜಯ ಅಶೋಕ ಶೆಟ್ಟಿ. ಉಪ ಕಾರ್ಯಧ್ಯಕ್ಷೆ ಉಮಾ ಸತೀಶ್ ಶೆಟ್ಟಿ,
ಕಾರ್ಯದರ್ಶಿ ಸಂಧ್ಯಾ ಎಸ್ ಶೆಟ್ಟಿ, ಖಜಾಂಚಿ ವೀಣಾ ಎಸ್ ಶೆಟ್ಟಿ, ಉಪಕಾರ್ಯದರ್ಶಿ ಅರುಣಾ ಶೆಟ್ಟಿ, ಉಪ ಖಜಾಂಜಿ    ಲೀಲಾವತಿ ಆಳ್ವ ಮತ್ತು  ಸಮಿತಿಯ  ಸದಸ್ಯೆಯರು ವಿನಂತಿಸಿಕೊಂಡಿದ್ದಾರೆ.

No comments

Powered by Blogger.