ಭಾರತ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ. ಜಯಭೇರಿ ಗಳಿಸಿದ ಜಯ ಸುವರ್ಣ ಪನೆಲ್.


ಭಾರತ್  ಬ್ಯಾಂಕ್ ಆಡಳಿತ ಮಂಡಳಿ  ಚುನಾವಣೆ.
 ಜಯಭೇರಿ  ಗಳಿಸಿದ  ಜಯ ಸುವರ್ಣ  ಪನೆಲ್.   

ಚಿತ್ರ : ಯೋಗೀಶ್ ಪುತ್ರನ್, ವರದಿ : ವಾಣಿ ಪ್ರಸಾದ್

         ಮುಂಬೈ :  ಮಹಾರಾಷ್ಟ್ರದ  ಮಣ್ಣಿನಲ್ಲಿ  ಬಿಲ್ಲವರ ಸಮಾಜದ ಹೆಗ್ಗುರುತಾದ, ತುಳು, ಕನ್ನಡಿಗರ  ಹೆಮ್ಮೆಯ ಭಾರತ್ ಬ್ಯಾಂಕ್ ನ  ಆಡಳಿತ ಮಂಡಳಿಯ  ಚುನಾವಣೆಯು  ಅಕ್ಟೋಬರ್ 2 ರಂದು  ನಡೆದಿತ್ತು.  


             ಇಂದು (ಅ.4) ಬೆಳಿಗ್ಗೆಯಿಂದ ರಾತ್ರಿ  ತನಕ ಮತ ಎಣಿಕೆ ನಡೆದು, ಜಯ ಸುವರ್ಣ ಪನೆಲ್  ಬಿಲ್ಲವರ ಅಸೋಸಿಯೆಶ್ಶನ್  ಪನೆಲ  ಎದುರು  ವಿಜಯಿಯಾಯಿತು.     


ಒಟ್ಟು 5 ಸುತ್ತಿನ ಮತ ಎಣಿಕೆ ನಡೆದಿದ್ದು, ಮೊದಲ ಸುತ್ತಿನಿಂದಲೇ ಜಯ ಸುವರ್ಣ ಪನೆಲ್ ನ ಎಲ್ಲ ಅಭ್ಯರ್ಥಿಗಳು ಅಧಿಕ ಮತ ಗಳಿಸಿ ಮುಂದಿದ್ದರು.


ಕೊನೆಯ ಸುತ್ತಿನ ಮತ ಎಣಿಕೆ ಮುಗಿದಾಗ ಜಯ ಸುವರ್ಣ ಪ್ಯಾನೆಲ್ ನ ಹೆಚ್ಚಿನ ಅಭ್ಯರ್ಥಿಗಳು 1500 ಕ್ಕೂ ಅಧಿಕ ಮತಗಳ ಅಂತರದಿಂದ ವಿಜಯಶಾಲಿ ಆದರು.


 ಭಾರತ್ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ 
ಈ ಬಾರಿ ಜಯ ಸುವರ್ಣ ಹಾಗೂ ಬಿಲ್ಲವರ ಏಸೋಸಿಯೇಷನ್ ಪ್ಯಾನೆಲ್ ನ ನಡುವೆ ನೇರ ಸ್ಪರ್ಧೆ ಏರ್ಪಟ್ಟು, ಎಲ್ಲರಲ್ಲೂ ಅತೀವ ಕುತೂಹಲ ಮೂಡಿಸಿತ್ತು. 

ಚುನಾವಣಾ ಫಲಿತಾಂಶ ಘೋಷಿತವಾದಂತ್ತೆ, ಜಯ ಸುವರ್ಣ ಅಭಿಮಾನಿ ಬಳಗ, ಹಿತೆಷಿಗಳು, ಸಮಾಜ ಬಾಂಧವರು ಜಯ ಸುವರ್ಣ ಪನೆಲ್ ನ ನಾಯಕ ಸೂರ್ಯಕಾಂತ ಜೆ. ಸುವರ್ಣ ಹಾಗೂ ಜಯಶಾಲಿಯಾದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು.

No comments

Powered by Blogger.