ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಮುಂಬೈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ


ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಮುಂಬೈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ 
 
   ಮುಂಬಯಿ ಅ 4. ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯಶ್ರೀಸುಗುಣೇಂದ್ರತೀರ್ಥಶ್ರೀಪಾದಂಗಳವರು ತಮ್ಮ ಶಿಷ್ಯರಾದ ಕಿರಿಯ ಪಟ್ಟದ ಪರಮಪೂಜ್ಯ  *ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರೊಡನೆ  ಅಕ್ಟೋಬರ್  7 ರಿಂದ 13 ರ ವರೆಗೆ ಮುಂಬೈ ಮಹಾನಗರದಲ್ಲಿ ಪರ್ಯಾಯ ಸಂಚಾರವನ್ನು ಮಾಡಿ ಭಕ್ತರನ್ನು ಅನುಗ್ರಹಿಸುವರಿದ್ದಾರೆ. 
ಈ ಹಿನ್ನೆಲೆಯಲ್ಲಿ ಪರಮಪೂಜ್ಯ ಶ್ರೀಪಾದರ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸೆ 30. ರಂದು  ಅಂಧೇರಿಯ ಶ್ರೀ ಅದಮಾರು ಮಠದಲ್ಲಿ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಯಿತು.
 ಇದೇ ಸಂದರ್ಭದಲ್ಲಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನುಬಿಡುಗಡೆ ಮಾಡಲಾಯಿತು. 


ಈ ಸಭೆಯಲ್ಲಿ  ಪ್ರಸಿದ್ಧ ಉದ್ಯಮಿಗಳು ಮತ್ತು ಪರಮಪೂಜ್ಯ ಶ್ರೀಪಾದರ ಮುಖ್ಯಾಭಿಮಾನಿಗಳಾದ  ಬಿ.ಆರ್.ಶೆಟ್ಟಿ,  ಶ್ರೀ ಅದಮಾರು ಮಠದ ಪ್ರಬಂಧ ಕ ರಾಜೇಶ ಭಟ್, ,  ಐಓಬಿ ಯ ಪೂರ್ವಾಧ್ಯಕ್ಷರಾದ  ಡಾ. ಎಂ.ನರೇಂದ್ರ,  ಹಿರಿಯ ವಕೀಲರಾದ  ಎನ್ ಆರ್ ರಾವ್,  ಲೆಕ್ಕಪರಿಶೋಧಕರಾದ   ಸಿಎ ಸುಧೀರ್ ಶೆಟ್ಟಿ, 
 ಉದ್ಯಮಿಗಳಾದ ಜಯಕೃಷ್ಣ ಶೆಟ್ಟಿ ,  ನಾರಾಯಣ ಆಚಾರ್ಯ,  ಪುಷ್ಪ ಆಚಾರ್ಯ  ಹಾಗೂ
ಶ್ರೀಪುತ್ತಿಗೆ  ಮಠಗಳ ಪ್ರತಿನಿಧಿಗಳು ಭಾಗವಹಿಸಿದ್ದರು
.  ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಕೋಟಿಗೀತಾ ಲೇಖನ ಯಜ್ಞದ ಪ್ರಚಾರಕರಾದ  ರಮಣ ಆಚಾರ್ಯರು ಪ್ರಾರ್ಥಿಸಿದರು. ಚೆನ್ನೈನ  ಶ್ರೀಪುತ್ತಿಗೆ ಮಠದ ಅಧಿಕಾರಿಗಳಾದ  ಮತ್ತು ಮುಂಬೈ ಕಾರ್ಯಕ್ರಮದ ಸಂಚಾಲಕರಾದ  ನಾರಾಯಣ ಆಚಾರ್ಯರು ಸಭೆಯ ಉದ್ದೇಶವನ್ನು ವಿವರಿಸಿದರು.


No comments

Powered by Blogger.