ಭಾರತ್ ಬ್ಯಾಂಕ್ ನ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಜಯ ಸಿ.ಸುವರ್ಣ ಬಣವನ್ನು ಬೆಂಬಲಿಸಿ - ಸೂರ್ಯಕಾಂತ ಜೆ.ಸುವರ್ಣ
ಆಕ್ಟೊಬರ್ 2 ರಂದು ಭಾರತ್ ಬ್ಯಾಂಕ್ ನ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಲಿದ್ದು, ಬಿಲ್ಲವ ಸಮಾಜದ ಅಭಿವೃದ್ಧಿಯ ಹರಿಕಾರ, ಜಯ ಸಿ.ಸುವರ್ಣ ಬಣದ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡುವಂತೆ ಬಣದ ಮುಖ್ಯಸ್ಥ ಸೂರ್ಯಕಾಂತ ಜೆ ಸುವರ್ಣ ಮನವಿ ಮಾಡಿದ್ದಾರೆ.
ಈ ಬಣವು ಮುಂಬೈ ಬಿಲ್ಲವರ ಮಹಾನ್ ಸಂಘಟನೆಯ ಸಹಸ್ರಾರು ಕಾರ್ಯಕರ್ತರು, ಹಿತೈಷಿಗಳು, ಪದಾಧಿಕಾರಿಗಳು, ಸ್ಥಳೀಯ ಕಛೇರಿಗಳ ಕಾರ್ಯಕರ್ತರು ಅಲ್ಲದೆ ತುಳು ಕನ್ನಡಿಗ, ಊರ ಬಾಂಧವರ, ಮಹಾರಾಷ್ಟ್ರ ವಾಸಿಗಳ ಬೆಂಬಲದಿಂದಾಗಿ ಸ್ಪರ್ಧಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸೂರ್ಯಕಾಂತ ಜೆ ಸುವರ್ಣ ನುಡಿದರು.
Bharat Bank Director's Election 2023 - 2028
JAYA C. SUVARNA PANEL
Post a Comment